Posts

ಓದಿನ ಸುಖ "ಗೂಡಿನಿಂದ ಬಾನಿಗೆ"

Image
ಪುಸ್ತಕದ ಹೆಸರು: ಗೂಡಿನಿಂದ ಬಾನಿಗೆ  ಲೇಖಕರು: ಹೇಮಾ ಹಟ್ಟಂಗಡಿ                  ಆಶಿಶ್ ಸೇನ್  ಅನುವಾದಕರು: ಸಂಯುಕ್ತಾ ಪುಲಿಗಲ್              ಸಾಮಾನ್ಯವಾಗಿ ಉದ್ಯಮವೆಂದರೆ ಪುರುಷ ಪ್ರಾಬಲ್ಯವಿರುವ ಕ್ಷೇತ್ರ ಎಂಬುದು ನಮ್ಮೆಲ್ಲರ ಅನಿಸಿಕೆ. ವಿದ್ಯಾಭ್ಯಾಸ ಗಳಿಸಿದ ಮಹಿಳೆ ಇಂದು ಎಲ್ಲಾ ರಂಗದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದರೂ ಉದ್ಯಮಪತಿಗಳಾಗುವುದು, ಒಂದು ಕಂಪೆನಿಯ CEO ಆಗುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ 90ರ ದಶಕದಲ್ಲಿ, ಪುರುಷ ಪ್ರಾಬಲ್ಯವಿರುವ ವಿದ್ಯುತ್ ಉದ್ದಿಮೆಯಲ್ಲಿ ಯಶ ಗಳಿಸುವುದಂತೂ ಸಾಹಸವೇ ಸರಿ. ಅಂತಹ ಒಬ್ಬ ಉದ್ಯಮಿ, ಸಾಧಕಿ ಮಹಿಳೆಯು ಬೆಳೆದು ಬಂದ ಪಥದ ಕಥನವೇ 'ಗೂಡಿನಿಂದ ಬಾನಿಗೆ' ಪುಸ್ತಕ. ಇದು Lift off ಎಂಬ ತಾಂತ್ರಿಕ ಉದ್ಯಮಶೀಲತೆಯ ಕುರಿತಾದ ಪುಸ್ತಕದ ಅನುವಾದ.             1988ರಲ್ಲಿ ಹೇಮಾ ಹಟ್ಟಂಗಡಿಯವರ ಮಾವನವರಾದ(ಗಂಡನ ತಂದೆ) ವಸಂತ್ ರಾವ್ ಅವರು 'ಎನರ್ಕಾನ್ ಸಿಸ್ಟಮ್ಸ್ ' ಅನ್ನು ಸ್ಥಾಪಿಸಿದರು. ವಿದ್ಯುಚ್ಛಕ್ತಿ ನಿರ್ವಹಣಾ ಮಾಪನ ಮತ್ತು ತಂತ್ರಾಂಶವು ಈ ಸಂಸ್ಥೆಯ ಉತ್ಪನ್ನವಾಗಿತ್ತು. ಅವರು ಒಬ್ಬ ಪ್ರತಿಭಾವಂತ ತಂತ್ರಜ್ಞಾನಿ, ಸಂಶೋಧಕರಾಗಿದ್ದರು. ಒಬ್ಬ ದೂರದೃಷ್ಟಿಯುಳ್ಳ ತಾಂತ್ರಿಕ ಆಡಳಿತಗಾರರಾಗಿದ್ದರು. ವಸಂತ್ ...

ಬಾಲಿ ಪ್ರವಾಸ ಕಥನ

Image
            ಪ್ರವಾಸಿ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ         ಬಾಲಿಯಲ್ಲಿ ನಡೆದಾಡುತ್ತಿದ್ದರೆ ಹಿಂದೂ ರಾಷ್ಟ್ರದ ಊರೊಂದರಲ್ಲಿ ಓಡಾಡುತ್ತಿರುವ ಅನುಭವವಾಗುತ್ತದೆ. ಇದು ಮನೆಯೋ ದೇವಸ್ಥಾನವೋ ಎಂಬ ಭೇದವೇ ಇಲ್ಲದಂತೆ ಕಟ್ಟಡಗಳು ಕಾಣುತ್ತವೆ. ಅಲ್ಲಲ್ಲಿ ಇರುವ ಪುರಾತನ ದ್ವಾರಗಳು ನಾವು ಯಾವುದೋ ನಾಟಕದ ಸೆಟ್ ನಲ್ಲಿರುವಂತೆ ಭಾಸವಾಗುತ್ತದೆ. ನಮ್ಮ ಡ್ರೈವರ್ ಹೇಳಿದಂತೆ, ಅಲ್ಲಿಯವರು ಮುಖ್ಯವಾಗಿ ಪೂಜಿಸುವುದು ಗಣೇಶ, ಸರಸ್ವತಿ ಹಾಗೂ ಪಾರ್ವತಿಯರನ್ನು. ಗಲ್ಲಿಗಲ್ಲಿಗಳಲ್ಲೂ ಗಣೇಶನ ಮೂರ್ತಿಗಳನ್ನು ಕಾಣಬಹುದು. ಸಾಂಸ್ಕೃತಿಕವಾಗಿ ರಾಮಾಯಣವನ್ನು ನೃತ್ಯದಲ್ಲಿ, ವಿಗ್ರಹಗಳಲ್ಲಿ ಅಳವಡಿಸಿಕೊಂಡಿದ್ದಾರೆ ಆದರೆ ರಾಮ ಕೃಷ್ಣರಿಗೆ ಪೂಜೆ ಇಲ್ಲವಂತೆ. ರಸ್ತೆ ಮಧ್ಯದ ಸರ್ಕಲ್ ಗಳಲ್ಲಿ ಮಹಾಭಾರತದ, ರಾಮಾಯಣದ ಪಾತ್ರಗಳ ವಿಗ್ರಹಗಳು, ದೇವರದ್ದೇ ವಿಗ್ರಹಗಳು ಅಂತ ಏನಿಲ್ಲ, ರಾಕ್ಷಸರ ಹಾಗೂ ಋಷಿಗಳ ಪ್ರತಿಮೆಗಳೂ ಸಹ ಇದ್ದವು.             ಅಲ್ಲಿಯ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ತುಂಬಾ ಸಾಮ್ಯತೆಗಳಿವೆ. ಸನಾತನ ಧರ್ಮವು ಮೂಲತಃ ಪ್ರಕೃತಿಯನ್ನು ಆರಾಧಿಸುವ ಧರ್ಮ. ಹಾಗಾಗಿ ನಮ್ಮ ಹೆಚ್ಚಿನ ದೇವಾಲಯಗಳು ಪ್ರಕೃತಿಯ ಮಧ್ಯದಲ್ಲಿ ಅಂದರೆ ಒಂದೋ ಬೆಟ್ಟದ ಮೇಲೆ ಇಲ್ಲವೇ ನದಿ ತೀರದಲ್ಲಿವ...

ಓದಿನ ಸುಖ "ಉಚಲ್ಯಾ"

Image
ಪುಸ್ತಕದ ಹೆಸರು: ಉಚಲ್ಯಾ  ಲೇಖಕರು: ಲಕ್ಷ್ಮಣ ಗಾಯಕವಾಡ  ಅನುವಾದಕರು: ಚಂದ್ರಕಾಂತ ಪೋಕಳೆ              ಇಡೀ ಪುಸ್ತಕವನ್ನು ಓದಿ ಒಮ್ಮೆ ಸ್ತಬ್ಧಳಾದೆ. ಹೀಗಿರುವ ಒಂದು ಜನಾಂಗವಿದೆ ಎಂಬ ಅರಿವೇ ನನಗಿರಲಿಲ್ಲ. ಬ್ರಿಟಿಷರಿಂದ 'criminal tribes' ಎಂದು ಕರೆಸಿಕೊಂಡ ಅಲೆಮಾರಿ ಜನಾಂಗ 'ಉಚಲ್ಯಾ'. ಅವರ ಬಡತನ, ಕಳ್ಳತನವನ್ನ ಮಾಡಿಯೇ ಜೀವನ ಸಾಗಿಸಬೇಕಾದ ಅನಿವಾರ್ಯತೆ, ಜೀವನ ಪೂರ್ತಿ 'ಅಪರಾಧಿಗಳು' ಎಂಬ ಹಣೆ ಪಟ್ಟಿಯಲ್ಲಿ ಓಡಾಡಬೇಕಾದ ಸಂಕಷ್ಟ ಹೀಗೆ ಹೊರ ಜಗತ್ತಿಗೆ ತೀರಾ ಅಪರಿಚಿತವಾಗಿರುವ ಹಲವಾರು ವಿಷಯಗಳನ್ನು ಲೇಖಕರು ತಮ್ಮ ಈ ಆತ್ಮಕಥೆಯಲ್ಲಿ ಮನಮುಟ್ಟುವಂತೆ ಬರೆದಿದ್ದಾರೆ.               ಉಚಲ್ಯಾವು ಅತ್ಯಂತ ಹಿಂದುಳಿದ ವರ್ಗವಾಗಿದ್ದು ಹುಟ್ಟಿದಾರಭ್ಯ ತಮ್ಮ ಕುಲಕಸುಬಾದ ಕಳ್ಳತನವೇ ಅವರ ವೃತ್ತಿ. ಹೆಂಗಸರು,ಗಂಡಸರು, ಮಕ್ಕಳು ಎಂಬ ಬೇಧವಿಲ್ಲದೆ ಎಲ್ಲರೂ ಕಳ್ಳತನದಲ್ಲಿ ನಿಸ್ಸೀಮರು. ಹಾಗಾಗಿ ಶಿಕ್ಷಣವೆನ್ನುವುದು ಇವರಿಗೆ ಮರೀಚಿಕೆ. ಯಾರಾದರೂ ಕಳ್ಳತನವನ್ನು ಬಿಟ್ಟು ಲೇಖಕರಂತೆ ಶಾಲೆಗೆ ಹೋದರೋ ಅವರನ್ನು ಸಮಾಜವೂ ಹೀಯಾಳಿಸುತ್ತಿತ್ತು. ಹಾಗಾಗಿ ಕಳ್ಳತನವು ಇವರಿಗೆ ಅನಿವಾರ್ಯವಾಗಿತ್ತು. ಹೀಗೆ ಕಳ್ಳತನ ಮಾಡಿ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದು ವಿವಿಧ ರೀತಿಯ ಶಿಕ್ಷೆಗಳನ್ನು ಅನುಭವಿಸಿ ತಾವು ಕದ್ದ ಮಾಲನ್ನು ವಾಪಾಸು ಪೊಲೀಸರಿ...

ಓದಿನ ಸುಖ "ಧೀರೆ"

Image
ಪುಸ್ತಕದ ಹೆಸರು: ಧೀರೆ (ಕೇತ್ಕರ್ ವಹಿನಿ) ಲೇಖಕರು : ಉಮಾ ಕುಲಕರ್ಣಿ(ಮರಾಠಿ ಮೂಲ) ಅನುವಾದಕರು : ವಿರೂಪಾಕ್ಷ ಕುಲಕರ್ಣಿ          ಕಳೆದ ವರ್ಷದ ಮಂಗಳೂರು ಲಿಟ್ ಫೆಸ್ಟ್ ನಲ್ಲಿದ್ದ ಸಾಹಿತ್ಯ ಭಂಡಾರದ ಸ್ಟಾಲ್ ನಲ್ಲಿ ಪುಸ್ತಕವನ್ನು ನೋಡುತ್ತಿದ್ದಾಗ "ಧೀರೆ" ಪುಸ್ತಕ ಕಣ್ಣಿಗೆ ಬಿತ್ತು. ಹೆಸರೇ ಆಕರ್ಷಕವಾಗಿತ್ತು. ಪುಸ್ತಕದ ಎರಡು ಪುಟ ಓದುತ್ತಿದ್ದಂತೆ ನನಗೆ ಇಷ್ಟವಾಗಿ ಕೊಳ್ಳಲು ಇತರ ಪುಸ್ತಕಗಳ ಜೊತೆ ಸೇರಿಸಿದೆ. ನಾನು ಪುಸ್ತಕವನ್ನು ಓದುತ್ತಿದ್ದನ್ನು ಕಂಡು ಅಲ್ಲಿದ್ದ ವ್ಯಕ್ತಿಯೊಬ್ಬರು "ಪುಸ್ತಕ ತುಂಬಾ ಚೆನ್ನಾಗಿದೆ. ಮಹಾರಾಷ್ಟ್ರದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ದುಡಿದವರೊಬ್ಬರ ಕಥೆ" ಎಂದು ಹೇಳಿದಾಗ ಇನ್ನಷ್ಟು ಆಸಕ್ತಿ ಮೂಡಿಸಿತು.            ಸ್ವಾತಂತ್ರ್ಯಾ ಪೂರ್ವದಲ್ಲಿ ಸ್ತ್ರೀ ಶಿಕ್ಷಣಕ್ಕಾಗಿ ಶ್ರಮಿಸಿದ ಹಾಗು ತಮ್ಮೆಲ್ಲ ಹೆಣ್ಣುಮಕ್ಕಳನ್ನು ಓದಿಸಿದ ಮಹಾರಾಷ್ಟ್ರದ ಕುಟುಂಬಕ್ಕೆ ಸೊಸೆಯಾಗಿ ಹೋದ ಮಾಲತಿಬಾಯಿ ಕೇತ್ಕರ್ ಅವರ ಜೀವನ ಚರಿತ್ರೆಯೇ "ಧೀರೆ".              ಮುಂಬಯಿಯ ಮಲಾಡದಲ್ಲಿ ಹುಟ್ಟಿದ ಮಾಲತಿಬಾಯಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. ಏಳನೇ ಕ್ಲಾಸ್ ನವರೆಗೆ ಓದಿದ ಇವರು ಮುಂದೆ ಓದುವ ಇಚ್ಛೆಯಿದ್ದರೂ ಸಹ ಹೆಚ್ಚಿನ ಖರ್ಚು ಅಮ್ಮನ ಮೇಲೆ ಬೀಳು...

ಓದಿನ ಸುಖ "ಬಲಾಢ್ಯ ಹನುಮ"

ಪುಸ್ತಕದ ಹೆಸರು : ಬಲಾಢ್ಯ ಹನುಮ ಪ್ರಕಾಶನದ ಹೆಸರು : ಅಯೋಧ್ಯಾ ಪ್ರಕಾಶನ          ಅಯೋಧ್ಯಾ ಪ್ರಕಾಶನದಿಂದ ರಾಮಾಯಣದ ಪುಸ್ತಕವನ್ನು ಓದಿ ಇಷ್ಟಪಟ್ಟ ನಾವು ಆನಂತರ ಬಲಾಢ್ಯ ಹನುಮ ಪುಸ್ತಕವನ್ನು ತರಿಸಿಕೊಂಡೆವು. ಮಗಳು ರಾಮಾಯಣ ಪುಸ್ತಕವನ್ನು ಓದಿ ಅದರಲ್ಲಿರುವ ಕಥೆಯನ್ನು ಹೇಳುವಂತೆ ಅವಳ ಅಜ್ಜ ಅಜ್ಜಿಯಲ್ಲಿ ಪೀಡಿಸುತ್ತಿದ್ದಳು. ಆ ಪುಸ್ತಕ ಆಂಗ್ಲ ಭಾಷೆಯಲ್ಲಿ ಇದ್ದುದರಿಂದ ಅವರಿಗೆ ಅದನ್ನು ಓದಲು ಕಷ್ಟವಾಗುತ್ತಿದ್ದರಿಂದ ಈ ಪುಸ್ತಕದ ಕನ್ನಡ ಅವತರಣಿಕೆಯನ್ನು ತರಿಸಿದೆ. ಈ ಪುಸ್ತಕವು ಸಹ ರಾಮಾಯಣ ಪುಸ್ತಕದಂತೆ ಅತ್ಯಂತ ಆಕರ್ಷಕವಾಗಿದೆ. ಹನುಮಂತನ ಬಾಲ್ಯದ ತುಂಟಾಟಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಹನುಮಂತನ ಸಾಹಸ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಚಿತ್ರಗಳೂ ಸಹ ಅತ್ಯಂತ ಆಕರ್ಷಕವಾಗಿವೆ. ಆದರೆ ಒಂದೇ ಒಂದು ಸಣ್ಣ ಕೊರತೆಯೆಂದರೆ ಹನುಮಂತನ ಕಥೆಯನ್ನು ವಿವಿಧ ಮೂಲಗಳಿಂದ ಪಡೆದುಕೊಂಡ ಕಾರಣವೋ ಏನೋ ಕಥೆಯ ಸರಣಿಯಲ್ಲಿ ನಿರಂತರತೆ ಇಲ್ಲ. ಇದೊಂದು ಸಣ್ಣ ಕೊರತೆ ಬಿಟ್ಟರೆ ಈ ಪುಸ್ತಕವೂ ಸಹ ಬಹಳ ಇಷ್ಟವಾಯಿತು.

ಓದಿನ ಸುಖ "ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)"

Image
ಪುಸ್ತಕದ ಹೆಸರು: ಮ್ಯಾಜಿಕ್ ಪಾಟ್ (ಸಾಪ್ತಾಹಿಕ ಪತ್ರಿಕೆ)       ಮಗಳಿಗೆ ಸುಮಾರು ಎರಡು - ಎರಡೂವರೆ ವರ್ಷವಾದಾಗ ಮನೆಯ ಹತ್ತಿರದ ಗ್ರಂಥಾಲಯಕ್ಕೆ ನಾನು ಹೋಗುವಾಗ ಅವಳನ್ನೂ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಮುಂಭಾಗದಲ್ಲಿ ವಿವಿಧ ಪತ್ರಿಕೆಗಳನ್ನು ಜೋಡಿಸಿರುತ್ತಿದ್ದರು. ಅವುಗಳ ಮಧ್ಯೆ ಮ್ಯಾಜಿಕ್ ಪಾಟ್ ಪುಸ್ತಕವೂ ಇತ್ತು. ಅದನ್ನು ನೋಡಿದ್ದೇ ತಡ ಮಗಳು ಕೈಗೆತ್ತಿಕೊಂಡಿದ್ದಳು. ಅಷ್ಟು ಆಕರ್ಷಣೀಯವಾಗಿತ್ತು ಆ ಪತ್ರಿಕೆ. ಆದರೆ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲದುದರಿಂದ ಮನೆಗೆ ಬಂದು ಈ ಪತ್ರಿಕೆಯ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡಿ ಚಂದಾದಾರರರಾದೆವು. ಅಮೇಲಿನಿಂದ ಪ್ರತಿ ಬುಧವಾರ ಮ್ಯಾಜಿಕ್ ಪಾಟ್ ಗೋಸ್ಕರ ಕಾಯುವುದೇ ನಮ್ಮ ಕೆಲಸವಾಯಿತು. ಒಮ್ಮೆ ಕೈಗೆ ಬಂದೊಡನೆಯೇ ಅದರಲ್ಲಿರುವ ಚಟುವಟಿಕೆ ಗಳನ್ನೆಲ್ಲ ಮಾಡಿ ಮುಗಿಸಿದರೆ ಸಮಾಧಾನ. ಚಿತ್ರಕಥೆಗಳು, ದಾರಿ ತೋರಿಸುವುದು, ಚುಕ್ಕಿ ಜೋಡಿಸುವುದು, ಸಾಹಸಕಥೆ, ನೀತಿಕಥೆ, ಬಣ್ಣ ತುಂಬುವುದು, ಅಕ್ಷರಗಳನ್ನು ಬರೆಯುವುದು, ಸಂಖ್ಯೆಗಳ ಗಣನೆ, ಚಿಕ್ಕ ಪುಟ್ಟ ಕವನಗಳು ಹೀಗೆ ಪುಟ ಪುಟವೂ ಮಕ್ಕಳನ್ನು ಆಕರ್ಷಿಸುವಂತೆ ರೂಪಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳು ಸ್ವತಃ ಮಾಡಲು ಸುಲಭವಾಗಿರುವಂತಹ ಪೇಪರ್ ಕ್ರಾಫ್ಟ್ ಕೂಡ ಇದೆ. ಇದನ್ನು ನೋಡಿ ಮಗಳು ಬಹಳ ಪೇಪರ್ ಕ್ರಾಫ್ಟ್ ಅನ್ನು ತಯಾರಿಸಿದ್ದಾಳೆ. ಅದಲ್ಲದೇ ಸ್ವಲ್ಪ ದೊಡ್ಡ ವಯಸ್ಸಿನ ಮಕ್ಕಳೇ ತಯಾರ...

ಓದಿನ ಸುಖ "Illustrated Ramayana"

ಪುಸ್ತಕದ ಹೆಸರು : Illustrated Ramayana  ಪ್ರಕಾಶನ : ಅಯೋಧ್ಯಾ ಪ್ರಕಾಶನ           ಮಗಳು ಟಿವಿಯಲ್ಲಿ 'ಲಿಟಲ್ ಕೃಷ್ಣ ' ಕಾರ್ಟೂನ್ ನೋಡಿ ಇಷ್ಟಪಟ್ಟಿದ್ದರಿಂದ ಇನ್ನು ರಾಮಾಯಣ ಕಥೆಯನ್ನು ಹೇಳಲು ಆರಂಭಿಸೋಣ ಎಂದು ಆಲೋಚಿಸುತ್ತಿದ್ದಾಗ ಈ ಮೊದಲೇ ಅವಳಿಗೋಸ್ಕರ ಒಂದು ರಾಮಾಯಣ ಪುಸ್ತಕವನ್ನು ತಂದಿದ್ದೆ. ಅದರ ಕಥೆಗಳನ್ನು ಓದಿ ಹೇಳುತ್ತಿದ್ದಾಗ ಅದು ಅವಳಿಗೆ ಅಷ್ಟೊಂದು ಆಕರ್ಷಣೀಯ ಎಂದು ಅನಿಸುತ್ತಿರಲಿಲ್ಲ. ಹಾಗಾಗಿ ಅರ್ಧದಲ್ಲೇ ಕಥೆ ಹೇಳುವುದನ್ನು ಕೈ ಬಿಟ್ಟಿದ್ದೆ. ಆಗ ನನಗೆ ಅಯೋಧ್ಯಾ ಪ್ರಕಾಶನದವರು ಹೊರತಂದ Illustrated Ramayana ಪುಸ್ತಕದ ಬಗ್ಗೆ ತಿಳಿದು ಪುಸ್ತಕವನ್ನು ತರಿಸಿಕೊಂಡು, ಅವರು ಈ ಪುಸ್ತಕದ ಬಗ್ಗೆ ನಡೆಸಿದ ರಸಪ್ರಶ್ನೆ ಸ್ಪರ್ಧೆಗೂ ಸಹ ನೊಂದಾಯಿಸಿದೆ.             ಒಮ್ಮೆ ಪುಸ್ತಕ ಕೈಗೆ ಬಂದಿದ್ದೇ ತಡ ಕೆಳಗಿಡಲು ಮನಸ್ಸೇ ಬರುತ್ತಿರಲಿಲ್ಲ ಅವಳಿಗೆ. ಕಥೆಯದ್ದೇ ಒಂದು ತೂಕವಾದರೆ ಪುಟ ತುಂಬಾ ಆವರಿಸಿದ ಚಿತ್ರಗಳದ್ದು ಇನ್ನೊಂದು ತೂಕ. ಕಥೆ ಮೂಲ ವಾಲ್ಮೀಕಿ ರಾಮಾಯಣಕ್ಕೆ ಹೆಚ್ಚು ನಿಷ್ಠವಾಗಿದೆ. ಚಿಕ್ಕ ಸುಂದರ ವಾಕ್ಯಗಳು ಮಕ್ಕಳಿಗೆ ಕಥೆಯನ್ನು ಅರ್ಥ ಮಾಡಿಸಲು ಸಹಾಯಕಾರಿಯಾಗಿದೆ. "ಕಾಡಲ್ಲಿ ರಾಕ್ಷಸರು ಇದ್ದಾರೆ ಎಂದು ತಿಳಿದಿದ್ದೂ ಸಹ ರಾಮ ಯಾಕೆ ಕಾಡಿಗೆ ಹೋಗಲು ಒಪ್ಪಿಕೊಂಡ?" "ಕೈಕೇಯಿ ಯಾಕೆ ರಾಮನನ್ನು ಕಾಡಿಗೆ ಕಳುಹಿಸಿದಳು?" ಮುಂತಾದ ಪ್ರಶ್ನೆ...